Friday, October 14, 2011

ಆಂ ಸ್ಟೋರಿ

                     ಕ್ಯಾಂಪಸ್ನಲ್ಲಿ ಹುಟ್ಟಿದ ಆಂ ಸ್ಟೋರಿ.

                                  ಕಾಲೇಜಿನ ಕಳೆದು ಹೋದ ಆ ದಿನಗಳ ನೆನಪುಗಳಲ್ಲಿ ತರ್ಲೆ ದಿನಗಳ ಮೆಲುಕು ಹ್ಹ ಹ್ಹ ಹ್ಹ.... ಕಾಲೇಜು ವಿದ್ಯಾಥರ್ಿಗಳೆಂದರೆ ಅವರು ಕವಿಗಳು ಪ್ರೀತಿ ಮಾಡುವಾಗ, ಅವರು ನಿದ್ರಾಸುತರು ಪಾಠ ಕೇಳುವಾಗ, ಅವರು ಧೈರ್ಯವಂತರು ಬಂಕ್ ಮಾಡುವಾಗ, ನಿಪುಣರು ಕಾಪಿ ಹೊಡೆಯುವಾಗ, ಅವರು ಪ್ರಜ್ಞಾವಂತರು, ಬುದ್ಧಿವಂತರು, ವಿನಯವಂತರು, ಗುಣವಂತರು ಸಕಲಕಲಾವಲ್ಲಭರು. ಅಯ್ಯೋ ಮರೆತಿದ್ದೆ ಕಥೆಗಾರರು ಕೂಡ, ಯಾಕೆ ಹೇಳ್ತಿದೀನಿ ಅಂದ್ರೆ ನಾವು ಕಥೆ ಬರಿತೀವಿ ಅಲ್ಲ ಅಲ್ಲ ಕ್ರಿಯೇಟ್ ಮಾಡ್ತೀವಿ. ನಮಗೆ ಸ್ಟೋರಿ ಹುಟ್ಟೋದೆ ಲೆಕ್ಚರ್ಸ್ನ ನೋಡಿದಾಗ. ಅವರ ಮೇಲಿನ ಹಿತಕರ ಕಾಮಿಡಿಗಳು, ಮಿಮಿಕ್ರಿಗಳು ಕ್ಯಾಂಪಸ್ನಲ್ಲಿ ಸಾಮಾನ್ಯ. ಅವರೇ ನಮಗೆ ಸ್ಪೂತರ್ಿ. ಕಥೆ ಹುಟ್ಟೋ ಸಮಯ ಶುರುವಾಗೋದು ಇಲ್ಲಿಂದ, ಪಾಠ-ಪಠ್ಯಗಳಿಂದಾಚೆಗೆ ಅವರ ನಡೆ ನುಡಿಗಳ ಮೇಲಿನ ಗಂಭೀರ ಗಮನ ಹರಿಸಿದಲ್ಲಿ.
 ಗಣಿತದ ಸರ್ ಒಬ್ರು ತುಂಬಾ ಸ್ಟ್ರಿಕ್ಟ್, ಅವರ ಕ್ಲಾಸ್ನಲ್ಲಿ ನಾವೆಲ್ಲ ಗಪ್ಚುಪ್. ಲೆಕ್ಕದ ಪ್ರತಿ ಸ್ಟೆಪ್ ಮುಗಿದ ಕೂಡಲೆ ಆಂ ಎಂದು ಸಂಭೋಧಿಸುತ್ತಿದ್ದರು. ಮಾತಿನ ಮೊದಲು ಅಥವಾ ಮಾತಿನ ಕೊನೆಯಲ್ಲಿ ಆಂ ಸೇರಿಸುವುದು ಅವರ ಅಭ್ಯಾಸ. ಅದು ನಮಗೆಲ್ಲ ನಗು ತರ್ತಿತ್ತು ಆದ್ರೂ ಕಂಟ್ರೋಲ್ ಮಾಡ್ಕೊಂಡು ಕೂರ್ತಿದ್ವಿ. ನಿಮಗೆ ಗೊತ್ತಿರಲಿ ಬೋರ್ ಹೊಡೆಯೊ ಕ್ಲಾಸ್ಗಳಲ್ಲಿ ಸಣ್ಣ ಸಣ್ಣ ಅಂಶಗಳು ನಗು ತರ್ಸುತ್ತೆ, ಮೇಲಾಗಿ ನಗೋದಿಕ್ಕೆ ಮನಸ್ಸು ಕಾಯ್ತ ಇರುತ್ತೆ ಯಾಕೆಂದ್ರೆ ನಗು ಬಂದ್ರೆ ನಿದ್ದೆ ಹೋಗುತ್ತೆ ಅಂತ ಅಷ್ಟೆ. ಕಾಲೇಜು ಹುಡುಗರಿಗೆ ಹಾಸ್ಯ ಪ್ರಜ್ಞೆ ಜಾಸ್ತಿ ಕಣ್ರಿ ಸುಮ್ ಸಮ್ನೆ ನಗ್ತಾ ಇರ್ತೀವಿ ನಮ್ಮನ್ನ ಎದ್ದು ನಿಲ್ಲಿಸಿ ಯಾಕ್ ನಗ್ತಿದ್ರಿ ಹೇಳಿ ಅಂತ ಕೇಳಿದ್ರೆ ನಮ್ಗೆ ಹೇಳೋಕೆ ಬರಲ್ಲ, ಒಂದು ಪಕ್ಷ ಹೇಳಿದ್ರು ಲೆಕ್ಚರ್ಸ್ಗಳಿಗೆ ಅದರಿಂದ ನಗು ಬರಲ್ಲ, ಬದಲಾಗಿ ಗೆಟ್ ಔಟ್ ಆಫ್ ದಿ ಕ್ಲಾಸ್ ಅಂತಾರೆ.


ಆಂ ಸ್ಟೋರಿ ಹುಟ್ಟಿದ ಸಮಯ:
 ನಮ್ಮ ಕ್ಯಾಂಪಸ್ನಲ್ಲಿ ಸಾಕಷ್ಟು ಕಲ್ಲು ಬೆಂಚುಗಳಿವೆ ಬೋರ್ ಆದಾಗ ಅಲ್ಲಿ ಕೂತು ಹರಟೋದು ನಮ್ಮ ಕಾಯಕ.
ಅವತ್ತು ಕ್ಲಾಸ್ ಇರ್ಲಿಲ್ಲ ನಮ್ಮ ಗುಂಪು ಅಲ್ಲಿ ಸೇರಿತ್ತು. ಆಂ ಸರ್ ಬರದೆ ಎರಡು ದಿನಗಳಾಗಿದ್ವು. ಆಂ ಸರ್ಗೆ ಆಂ ಜ್ವರ ಬಂದಿದೆಯಂತೆ ಮೊದ್ಲು ಮಾತಿನ ಶುರುವಿನಲ್ಲಿ ಹಾಗೂ ಕೊನೆಯಲ್ಲಿ ಆಂ ಅಂತ್ತಿದ್ರು ಈಗ ಮಾತೆ ಇಲ್ಲ ಬರಿ ಆಂ ಅಂತೆ ಅಂತ ರಿಪೂ ಹೇಳ್ದ, ಅತ ಹಾಸ್ಯ ಪ್ರವೃತ್ತಿಯ ಗೆಳೆಯ ಪೂರಿ ತರ ದಪ್ಪಗೆ ಇದ್ದ ಹಾಗಾಗಿ ಪೂರಿನ ಉಲ್ಟಾ ಮಾಡಿ ರಿಪೂ ಅಂತ ಕರಿತಿದ್ವಿ. ಆತ ಗಣಿತದ ಟೆಸ್ಟನಲ್ಲಿ ಅತೀ ಕಡಿಮೆ ಅಂಕ ಗಳಿಸಿ ಆಂ ಸರ್ ಹತ್ರ ಬೈಸಿಕೊಂಡಿದ್ದ. ನಿಮಗೆ ಆಂ ಸ್ಟೋರಿ ಗೊತ್ತಾ ಕೇಳ್ದ ಅಯ್ಯೋ ಇಲ್ಲ ಮಾರಾಯ ನಮ್ಗೆ ಕ್ರೈಂ ಸ್ಟೋರಿ ಮಾತ್ರ ಗೊತ್ತು ಅಂದ್ವಿ. ರಿಪೂ ಕಥೆ ಕಟ್ಟಕ್ಕೆ ಶುರು ಮಾಡ್ದ.


ಆಂ ಸ್ಟೋರಿ:
ನಮ್ಮ ಆಂ ಸರ್ ಸಣ್ಣವರಿದ್ದಾಗ ಸಿಕ್ಕಾಪಟ್ಟೆ ಮಾವಿನಹಣ್ಣುಗಳನ್ನ ತಿಂತಿದ್ರು. ಅವರಿಗೆ ಮಾವು ಅಂದ್ರೆ ಪಂಚಪ್ರಾಣ. ಅಪ್ಪ ತಂದು ಬಚ್ಚಿಟ್ಟ ಮಾವುಗಳನ್ನೆಲ್ಲಾ ಮುಂಡಾಯಿಸಿದ ಬಳಿಕ ಅಕ್ಕ ಪಕ್ಕದ ತೋಟಗಳಿಗೆ ನುಗ್ಗಿ ಮಾವುಗಳನ್ನ ಕದ್ದು ತಿನ್ನುತ್ತಿದ್ದರು. ಊರಿನಲ್ಲಿ ಮಾವಿನ ಸರದಾರ ಎಂದೇ ಪ್ರಖ್ಯಾತಿಗೊಂಡಿದ್ದರು. ಊರಿನ ತೋಟಗಳಿಂದ ಮಾವುಗಳನ್ನು ಕದ್ದು ತಿಂದ ಪರಿಣಾಮ ಮಾವಿನ ಬೆಲೆ ಗಗನಕ್ಕೇರಿತ್ತು. ಇವರಿಗೂ ಅದರ ಬಿಸಿ ತಟ್ಟಿತ್ತು, ಜ್ವರದ ತಾಪಮಾನ ಏರಿ ಆಂ ಸರ್ ಹಾಸಿಗೆ ಹಿಡಿದಿದ್ದರು. ಡಾಕ್ಟರ್ ಬೇರೆ ಇನ್ನೊಂದೆ ಒಂದು ಮಾವು ತಿಂದರೂ ಜೀವಕ್ಕೆ ಆಪತ್ತು ಜೊತೆಗೆ ಎಲ್ಲ ಮಾವುಗಳನ್ನ ಈತನೊಬ್ಬನೆ ತಿಂದರೆ ಭವಿಷ್ಯದಲ್ಲಿ ಮಾವಿನ ಕೊರತೆ ಎದುರಿಸಬೇಕಾಗಬಹುದು ಎಂದು ಎಚ್ಚರಿಕೆಯ ಹುಳ ಬಿಟ್ಟು ಹೋಗಿದ್ರು. ಇದರಿಂದ ಚಿಂತಾಕ್ರಾಂತರಾದ ಪೋಷಕರು ಒತ್ತಾಯವಾಗಿ ಮಗನಿಂದ ಭಾಷೆ ತಕೋತಾರೆ. ಆಂ ಸರ್ ಕೂಡ ಒಲ್ಲದ ಮನಸಿನಿಂದ ಜೀವ ಇದ್ರೆ ಬಾಳೆಹಣ್ಣು ತಿಂದು ಬಾಳುವೆ ಎಂದು ನಿರ್ಧರಿಸಿ ನೊಂದ ಮನಸಿನಿಂದ ಇನ್ಯಾವತ್ತು ಕೂಡ ಆಂ (ಹಿಂದಿಯ ಆಂ) ತಿನ್ನಲ್ಲ ಅಂತ ಭಾಷೆ ಕೊಡ್ತಾರೆ. ಆಗಿಂದ ಈವರೆಗೂ ಆಂ ನ ನೆನಪಿನಿಂದ ಹೊರಬರಕ್ಕೆ ಆಗದೆ ಪ್ರತಿ ದಿನ ಲೆಕ್ಕಕ್ಕೆ ಸಿಗದಷ್ಟು ಸಲ ಆಂ ಜಪ ಮಾಡ್ತಿರ್ತಾರೆ. ಇದೆ ಆಂ ಸ್ಟೋರಿ ಅಂದ.
ಆಂ ಹಿಂದೆ ಇಂಥದೊಂದು ಸ್ಟೋರಿ ಇರುತ್ತೆ ಅಂತ ನಮ್ಗೆ ಗೊತ್ತಿರಲಿಲ್ಲ. ಕ್ಷಮಿಸಿ ನಾವು ಮಾಡೋದೆಲ್ಲ ತಮಾಷೆಗಾಗಿ ಇದು ತರ್ಲೆ ಹಿಂದಿನ ಸ್ಲೋಗನ್.


 --ದಿವ್ಯ ಚಂದ್ರಕಾಂತ್, ಶಿವಮೊಗ್ಗ.
 

No comments:

Post a Comment